LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಇರಾನ್ ಮೇಲೆ ಅಮೇರಿಕಾ, ಇಸ್ರೇಲ್ ದಾಳಿ ಖಂಡನೀಯ

Advertisement
ಸಿಂಧನೂರು : ಇರಾನ್ ಮೇಲೆ ಅಮೇರಿಕಾ, ಇಸ್ರೇಲ್ ಸಾಮ್ರಾಜ್ಯವಾದಿ ಶಿಬಿರ ನಡೆಸುತ್ತಿರುವ ಯುದ್ಧ ದಾಳಿ, ಪ್ರಚೋದನೆ ಮತ್ತು ಅಸ್ಥಿರಗೊಳಿಸುವ ಕಾರ್ಯಾಚರಣೆಗಳ ಮುಂದುವರಿಕೆಯಾಗಿ, ಇರಾನ್ ಪರಮೋಚ್ಚನಾಯಕ ಅಯಾತೊಲ್ಲಾ ಅಲಿ ಖೈಮನಿ ಅವರನ್ನು ಹತ್ಯೆ ಮಾಡಿದ್ದು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಸಿಪಿಐಎಂಎಲ್ ರೆಡ್ ಸ್ಟಾರ್ ಹಾಗೂ ಪ್ರಗತಿಪರ ಸಂಘಟನೆಗಳು ಈ ರಾಜಕೀಯ ಹತ್ಯೆಯನ್ನು ಯಾವುದೇ ಗೊಂದಲವಿಲ್ಲದೆ, ತೀಕ್ಷ್ಣವಾಗಿ ಮತ್ತು ಕ್ರಾಂತಿಕಾರಿ ದೃಢತೆಯಿಂದ ಖಂಡಿಸುತ್ತದೆ
ಈ ಒಂದು ಭಯಾನಕ ವಾತಾವರಣದಲ್ಲಿ ಭಾರತದ ಪ್ರಧಾನಿ ಮೋದಿ ವಹಿಸುತ್ತಿರುವ ಮೌನ ಅತ್ಯಂತ ಜನವಿರೋಧಿ ಮತ್ತು ಲಜ್ಜಾಸ್ಪದ
ಅಪಾಯಕಾರಿ ಪ್ರವೃತ್ತಿಯಾಗಿದೆ ಇಂದು ಇರಾನ್ ನಾಳೆ ಇನ್ನೊಂದು ದೇಶ. ಆದ್ದರಿಂದ ವಿಶ್ವದ ಕಾರ್ಮಿಕ ವರ್ಗ, ಕಮ್ಯುನಿಸ್ಟ್ ಶಕ್ತಿಗಳು ಮತ್ತು ಎಲ್ಲಾ ಅಳತೆಯ ಜನತೆ ಸಾಮ್ರಾಜ್ಯವಾದಿ ಮತ್ತು ರಾಜಕೀಯ ಅಗತ್ಯಗಳಿಗೆ ವಿರುದ್ಧವಾಗಿ ಏಕತೆಯಿಂದ ಎದ್ದು ನಿಲ್ಲಬೇಕಾಗಿದೆ. ಎಂದು
ನಗರದ ಗಾಂಧಿ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್, ಕರ್ನಾಟಕ ಕೃಷಿ ಕೂಲಿಕಾರರ ಸಂಘ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟಿಸಿ ಆಗ್ರಹಿಸಲಾಯಿತು.

ಈ ಸಂಧರ್ಭದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ. ಗಂಗಾಧರ್. ಕೃಷಿ ಕಾರ್ಮಿಕರ ಸಂಘದ ಅಧ್ಯಕ್ಷರು ಅಪ್ಪಣ್ಣ ಕಾಂಬ್ಳೆ, ದಲಿತ ವಿದ್ಯಾರ್ಥಿ ಪರಿಷತ್ ,ಡಿವಿಪಿ.ನ ದುರುಗೇಶ್ ಕಲ್ಮಂಗಿ. ನರಸಪ್ಪ ಬಡಿಗೇರ್, ಶಿವುಪುತ್ರ, ರಾಜ್ಯ ರೈತ ಸಂಘದ ಪ್ರ. ಕಾರ್ಯದರ್ಶಿ, ಬಸವರಾಜ ಗೋಡಿಹಾಳ,ಹೆಚ್ ಆರ್. ಹೊಸಮನಿ, ಮುದಿಯಪ್ಪ ಹೆಚ್ ಎನ್. ಕ್ಯಾಂಪ್, ಧರಗಯ್ಯ, ಸಂಗಪ್ಪ, ಹುಲುಗಪ್ಪ ಬಳ್ಳಾರಿ, ನಿರಂಜನಕುಮಾರ್, ಎಂ. ಎಸ್. ರಾಜಶೇಖರ್, ಬಾಲಪ್ಪ, ಕರಿಯಮ್ಮ ವಿರುಪಾಪುರ, ರಂಗಮ್ಮ, ಶರಣಮ್ಮ, ದೇವಕೇಮ್ಮ, ಆಂಜನೇಯ್ಯ ಸೇರಿದಂತೆ ಇತರರು ಇದ್ದರು.

ವರದಿ: ಬಸವರಾಜ ಬುಕ್ಕನಹಟ್ಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ