LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ತೆಕ್ಕಲಕೋಟೆಯಲ್ಲಿ ಅಪರೂಪದ ಹುಲಿ ಬೇಟೆಯ ವೀರಗಲ್ಲು ಪತ್ತೆ

Advertisement

ಬಳ್ಳಾರಿ: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ 14ನೇ ವಾರ್ಡಿನ ವಾಲ್ಮೀಕಿ ನಗರದ ವಡ್ಡರಕಟ್ಟೆ ಬಳಿ ಹುಲಿಬೇಟೆ ವೀರಗಲ್ಲು ಪತ್ತೆಯಾಗಿದೆ ಎಂದು ಮೈಸೂರು ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಅಧೀಕ್ಷಕ, ಶಾಸನತಜ್ಞ ಅನಿಲಕುಮಾರ್ ಆರ್.ವಿ. ತಿಳಿಸಿದ್ದಾರೆ.

ಭಾರತ ಶ್ರೀ ಯೋಜನೆಯಡಿ ತೆಕ್ಕಲಕೋಟೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸನಗಳ ಸಂರಕ್ಷಣೆಗೆ ನಡೆದ ಡಿಜಿಟಲೀಕರಣ ಪ್ರಕ್ರಿಯೆ ಭಾಗವಾಗಿ ಪಟ್ಟಣದಲ್ಲಿ ಭೇಟಿ ನೀಡಿ ವೀರಗಲ್ಲಿನ ಪಡಿಯಚ್ಚು ಪಡೆದುಕೊಂಡರು.

ಶಾಸನ ತಿಳಿಸುವಂತೆ, ಅನುಮಯರ ಮಗ ಹುಲಿಬೇಟೆಯಲ್ಲಿ ಮರಣ ಹೊಂದಿದ. ಆತನ ಸ್ಮರಣಾರ್ಥ ವೀರಗಲ್ಲು ಕೆತ್ತಲಾಗಿದೆ. ಇದರಲ್ಲಿ ಅಂಗೀರಸ ಸಂವತ್ಸರ, ವೈಶಾಖ ಬ 8 ಎಂದು ಕಾಲದ ವಿವರವಿದ್ದು, ಸಂಪೂರ್ಣ ಮಾಹಿತಿ ಲಭ್ಯವಿಲ್ಲ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST