LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಣಜಿ ಟ್ರೋಫಿ ಫೈನಲ್: ಕರ‍್ನಾಟಕಕ್ಕೆ ಇನ್ನಿಂಗ್ಸ್ ಹಿನ್ನೆಡೆ

Advertisement
ಹುಬ್ಬಳ್ಳಿ: ಕರ‍್ನಾಟಕ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಪಡೆಯಲು ವಿಫಲವಾಗಿದೆ. ಈ ಮೂಲಕ ಮತ್ತೇ ರಣಜಿ ಟ್ರೋಫಿ ಎತ್ತಿ ಹಿಡಿಯಬೇಕೆಂಬ ಕರ‍್ನಾಟಕದ ಆಅೆ ಕಮರಿದಂತಾಗಿದೆ.
ಇಲ್ಲಿನ ಕೆ.ಎಸ್.ಸಿ.ಎ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಜಮ್ಮು ಕಾಶ್ಮೀರ ತಂಡವು ೫೮೪ ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ದೊಡ್ಡ ಮೊತ್ತ ಬೆನ್ನಟ್ಟಿದ್ದ ಕರ‍್ನಾಟಕ ತಂಡವು ೨೯೩ ರನ್ ಗಳಿಗೆ ಆಲೌಟಾಯಿತು. ಇದರಿಂದ ಇನ್ನಿಂಗ್ಸ್ ಮುನ್ನಡೆ ಪಡೆದು ಟ್ರೋಫಿ ಎತ್ತಿ ಹಿಡಿಯಬೇಕೆಂಬ ರ‍್ನಾಟಕದ ಕನಸು ನನಸಾಗಲಿಲ್ಲ.
ಪಂದ್ಯದ ನಾಲ್ಕನೇ ದಿನ ಚಹಾ ವಿರಾಮದ ನಂತರದ ಆಟದಲ್ಲಿ ತನ್ನ ದ್ವಿತೀಯ ಸರದಿಯಲ್ಲಿ ಜಮ್ಮು ಕಾಶ್ಮೀರ ತಂಡವು ೩ ವಿಕೆಟ್‌ಗೆ ೧೦೩ ರನ್ ಗಳಿಸಿದ್ದು, ಒಟ್ಟಾರೆ ಪ್ರವಾಸಿ ತಂಡವು ೩೯೭ ರನ್‌ಗಳ ಮುನ್ನಡೆ ಪಡೆದಿದೆ. ಹೀಗಾಗಿ ಕರ‍್ನಾಟಕ ಈ ಪಂದ್ಯದಲ್ಲಿ ಗೆಲ್ಲಬೇಕೆಂದರೆ ಜಮ್ಮು ಕಾಶ್ಮೀರ ತಂಡದ ಉಳಿದ ೭ ವಿಕೆಟ್‌ಗಳನ್ನು ಬೇಗನೆ ಪಡೆದು ಗೆಲುವಿನ ಗುರಿ ದಾಟಬೇಕಿದೆ. ಈ ಸಾಧ್ಯತೆಗೆ ಈಗ ತೀರಾ ವಿರಳವಾಗಿದ್ದು, ದೇವದತ್ತ ಪಡಿಕಲ್ ನೇತೃತ್ವದ ತಂಡ ಫೈನಲ್‌ನಲ್ಲಿ ಮುಗ್ಗರಿಸುವ ಸಾಧ್ಯತೆಯೇ ದಟ್ಟವಾಗಿದೆ.
ಸ್ಕೋರ್ ವಿವರ
ಜಮ್ಮು ಕಾಶ್ಮೀರ್ ಮೊದಲ ಇನ್ನಿಂಗ್ಸ್ ೫೮೪
ಕರ‍್ನಾಟಕ ಮೊದಲ ಇನ್ನಿಂಗ್ಸ್ ೨೯೩
ಮಯಾಂಕ್ ಅಗರವಾಲ್ ೧೬೦ ( ೨೬೬ ಎಸೆತ, ೨೧ ಬೌಂಡರಿ)
ಅಖೀಬ್ ನಬಿ ದಾರ ೫೪ ಕ್ಕೆ ೫
ಜಮ್ಮು ಕಾಶ್ಮೀರ್ ದ್ವಿತೀಯ ಇನ್ನಿಂಗ್ಸ್ ೩ ವಿಕೆಟ್‌ಗೆ ೧೦೩
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST