LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಖಜ್ಜಿಡೋಣೆಯಲ್ಲಿ ಡಿ ಕೆ ಡಿ ಡ್ಯಾನ್ಸ್ ಸ್ಪರ್ಧೆಗೆ ವಿಧಾನ ಪರಿಷತ ಸದಸ್ಯ  ಪಿ. ಎಚ್. ಪೂಜಾರ ಚಾಲನೆ

Advertisement

ಕಲಾದಗಿ : ಸಮೀಪದ ಖಜ್ಜಿ ಡೋಣಿ ಗ್ರಾಮದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮೊಂಬೆಯ ಜಾತ್ರಾ ಮಹೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು. ಖಜ್ಜಿಡೋನೆ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ನಡೆಯಲಿರುವ ರಾಜ್ಯಮಟ್ಟದ ಡಿ ಕೆ ಡಿ ಡ್ಯಾನ್ಸ್ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಥಮ ಬಹುಮಾನ ರೂ 50 ಸಾವಿರ, ದ್ವಿತೀಯ ಬಹುಮಾನ 40 ಸಾವಿರ, ತೃತೀಯ ಬಹುಮಾನ 30 ಸಾವಿರ, ಚತುರ್ಥಿ ಬಹುಮಾನ 20 ಸಾವಿರ. ಈ ಡಿ ಕೆ ಡಿ ಕಾರ್ಯಕ್ರಮವನ್ನು ವಿಧಾನ ಪರಿಷತ ಸದಸ್ಯ ಪಿ ಎಚ್ ಪೂಜಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ಗ್ರಾಮೀಣ ಭಾಗದ ಸಾಂಸ್ಕೃತಿಕ ಚಟುವಟಿಕೆಗಳು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು ಜಾತ್ರೆಗಳ ಧಾರ್ಮಿಕ ಆಚರಣೆಗಳು ಜೊತೆಗೆ ಸಾಮಾಜಿಕ ಸಾಮರಸ್ಯ ಮತ್ತು ಸಂಸ್ಕೃತಿಕ ಪರಂಪರೆಗಳನ್ನು ಬೆಳೆಸುವುದು ಪ್ರಮುಖ ಪಾತ್ರ ಬಯಸುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.  ಇದೇ ಕಾರ್ಯಕ್ರಮದಲ್ಲಿ.  ಖಜ್ಜಿಡೋಣೆಯ ಶಂಕರಾಚಾರ್ಯ ಅವಧೂತ ಆಶ್ರಮದ ಶ್ರೀಗಳಾದ ಶಿವಾನಂದ ದಿವ್ಯ ಸಾನಿಧ್ಯ ವಹಿಸಿದ್ದರು, ಮಾಜಿ ಸಚಿವ ಎಸ್ ಆರ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು ಹಾಗೂ ಖಜ್ಜಿಡೋನಿಯ ಖ್ಯಾತ ಪ್ರವಚನಕಾರ ಕ್ರಿಷ್ಣಾನಂದ ಶಾಸ್ತ್ರಿಗಳು ಸೇರಿದಂತೆ, ಅನೇಕ ರಾಜಕೀಯ ಧುರೀಣರು, ಆಧ್ಯಾತ್ಮಿಕ ಚಿಂತಕರು, ವಿಶೇಷ ಅಹ್ವಾನಿತಾರಾಗಿ ಆಗಮಿಸಿದ್ದರು.

ಈ ಜಾತ್ರಾ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ನಡೆದ ಡಿ ಕೆ ಡಿ ಡ್ಯಾನ್ಸ್ ಸ್ಪರ್ಧೆಯಲ್ಲಿ ಯುವಕರು ಉತ್ಸಾಹದಿಂದ ಭಾಗವಹಿಸಿದರು.    

ವರದಿ : ಬಸವರಾಜ ಪೂಜಾರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST