ಬೆಳಗಾವಿ: ಭಾರತ ವೈಭವ್ ಪತ್ರಿಕೆಯ ಕ್ರೈಂ ತಂಡವು ಫೆಬ್ರುವರಿ 20ರಂದು ಮಟಕಾ ದಂಧೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಲಾಯಿತು ಈ ವರದಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಇನ್ಸ್ಪೆಕ್ಟರ್ ಆದ ಜಿ ಎಂ ಕಾಲಿಮಿರ್ಚಿ ಅವರ ನೇತೃತ್ವದ ವಿಶೇಷ ತಂಡವನ್ನು ರಚಿಸಿ ಮಟಕಾ ದಂಧೆಯ ಸಂಪೂರ್ಣ ಮಾಹಿತಿಯನ್ನು ಪಡೆದು ಫೆಬ್ರವರಿ 25ರಂದು ಮಟಕಾ ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಗಜಾನನ ಭಾವಕನಾ ಪಾಟೀಲ್ ರಸೂಲ್ ಬಾಬು ಶೇಖ ರಾಜೇಶ್ ನೇತಾಜಿ ಶಹಪೂರಕರ ಮಹಮ್ಮದಶಪಿ ಮೋದಿನ ಸಾಬ್ ತಹಶೀಲ್ದಾರ್ ತೈಯಬ್ ಮುಕ್ಕಾರ್ ಇನಾಮದಾರ್ ಕೃಷ್ಣ ನಾರಾಯಣ ಪೂಜಾರಿ ಮೈಬೂಬ್ ಸಾಬ್ ಕುತುಬುದಿನ ಘೊಢೆಸವಾರ ಶಂಭಂ ಗಿರೀಶ್ ಘೋಡಕೆ ಪಾಹಿಮ ಜಿಲಾನಿ ಕೊತ್ವಾಲ್ ಒಟ್ಟು 9 ಜನ ಆರೋಪಿಗಳನ್ನು ಬಂಧಿಸಿ ಕೇಸ್ ದಾಖಲಿಸಿ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ನಮ್ಮ ವರದಿಗೆ ಸ್ಪಂದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಾರ್ಕೆಟ್ ಪೊಲೀಸ್ ಠಾಣೆಗೆ ವಿಶೇಷ ಅಭಿನಂದನೆಗಳನ್ನು ನಮ್ಮ ಪತ್ರಿಕೆಯಿಂದ ತಿಳಿಸುತ್ತೇವೆ
ವರದಿ :ನಿತೀಶಗೌಡ ತಡಸ ಪಾಟೀಲ್
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.