LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಮೌಂಟ್ ಎವರೆಸ್ಟ್ ಇಳಿಯುವಾಗ ಇಬ್ಬರು ಭಾರತೀಯರು ದುರ್ಮರಣ 

Advertisement

ಕಠ್ಮಂಡು: ವಿಶ್ವದ ಅತಿ ಎತ್ತರದ ಪರ್ವತ ಶಿಖರವಾದ ಮೌಂಟ್ ಎವರೆಸ್ಟ್ ಮುಖಾಮುಖಿಯಾಗಿ, ಅದನ್ನು ಯಶಸ್ವಿಯಾಗಿ ಏರಿ ದಾಖಲೆ ಬರೆದ ಬೆನ್ನಲ್ಲೇ ಇಬ್ಬರು ಭಾರತೀಯ ಪರ್ವತಾರೋಹಿಗಳು ದುರಂತ ಅಂತ್ಯ ಕಂಡಿದ್ದಾರೆ.

ಶಿಖರವನ್ನು ತಲುಪಿ ಕೆಳಗೆ ಇಳಿಯುವಾಗ ತೀವ್ರ ಸುಸ್ತಿನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ನೇಪಾಳದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮೃತರನ್ನು ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಆರೆ ಎಂದು ಗುರುತಿಸಲಾಗಿದೆ. ನೇಪಾಳದ ಎಕ್ಸ್ಪೆಡಿಶನ್ ಆಪರೇಟರ್ಸ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ಅವರ ಪ್ರಕಾರ, ಸಂದೀಪ್ ಆರೆ ಇವರು ಬುಧವಾರ ವಿಶ್ವದ ಅತಿ ಎತ್ತರದ ಶಿಖರವನ್ನು ಯಶಸ್ವಿಯಾಗಿ ಏರಿದ್ದರು. 

ಆದರೆ ಗುರುವಾರ ಮರಳಿ ಕೆಳಗೆ ಇಳಿಯುವಾಗ ತೀವ್ರ ಆಯಾಸಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಶೆರ್ಪಾ ಮಾರ್ಗದರ್ಶಕರು (ಗೈಡ್ಸ್) ಅವರನ್ನು 'ಬಾಲ್ಕನಿ' ಪ್ರದೇಶದಿಂದ 'ಸೌತ್ ಕೋಲ್'ಗೆ ರಾತ್ರೋರಾತ್ರಿ ಕರೆತಂದು ಜೀವ ಉಳಿಸಲು ತೀವ್ರ ಪ್ರಯತ್ನ ನಡೆಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಅರುಣ್ ಕುಮಾರ್ ತಿವಾರಿ: ಇವರು ಗುರುವಾರ ಸಂಜೆ ಸುಮಾರು 5.30 ಕ್ಕೆ ಎವರೆಸ್ಟ್ ಶಿಖರದ ತುತ್ತತುದಿಯನ್ನು ತಲುಪಿದ್ದರು. ಇಬ್ಬರು ಅನುಭವಿ ಶೆರ್ಪಾ ಮಾರ್ಗದರ್ಶಕರೊಂದಿಗೆ ಕೆಳಗೆ ಇಳಿಯುತ್ತಿದ್ದಾಗ, ಪ್ರಸಿದ್ಧ 'ಹಿಲರಿ ಸ್ಟೆಪ್' ಬಳಿ ತೀವ್ರ ಸುಸ್ತಿನಿಂದ ಬಳಲಿದ್ದಾರೆ.

 ಗೈಡ್ಗಳು ಅವರನ್ನು ರಕ್ಷಿಸಲು ಸತತ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ತಿವಾರಿ ಅವರನ್ನು ಸುರಕ್ಷಿತವಾಗಿ ಕರೆತರಲು ಸಾಧ್ಯವಾಗಲಿಲ್ಲ. ಅವರು ನಿಖರವಾಗಿ ಯಾವಾಗ ಮೃತಪಟ್ಟರು ಎಂಬುದು ಇನ್ನು ಸ್ಪಷ್ಟವಾಗಿಲ್ಲ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ