LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ತೆಲಂಗಾಣ ಭೀಕರ ಕೌರ್ಯ : 600 ನಾಯಿಗಳಿಗೆ ವಿಷವಿಕ್ಕಿ ಕೊಲೆ

Advertisement
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಮಾಚರೆಡ್ಡಿ ಮಂಡಲದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೀದಿ ನಾಯಿ ಸಮಸ್ಯೆಯ ನೆಪದಲ್ಲಿ 600 ನಾಯಿಗಳಿಗೆ ವಿಷ ನೀಡಿ ಕೊಂದಿರುವುದು ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸುತ್ತಿದೆ.

ಈ ದುಷ್ಕೃತ್ಯ ಎಸಗಿದ ಆರೋಪದ ಮೇಲೆ ಐದು ಗ್ರಾಮಗಳ ಸರಪಂಚರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಾಚರೆಡ್ಡಿ ಮಂಡಲದ ಭವಾನಿಪೇಟೆ, ಫರೀದ್ಪೇಟೆ, ವಾಡಿ, ಪಲ್ವಂಚ ಮತ್ತು ಬಂಡರಾಮೇಶ್ವರ ಪಲ್ಲಿ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಅವು ಜನರಿಗೆ ತೊಂದರೆ ನೀಡುತ್ತಿವೆ ಎಂದು ಸ್ಥಳೀಯ ಸರಪಂಚರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ, ನಾಯಿಗಳನ್ನು ನಿಯಂತ್ರಿಸಲು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವ ಬದಲು, ವಿಷ ನೀಡಿ ಸಾಮೂಹಿಕವಾಗಿ ಕೊಲ್ಲಲು ನಿರ್ಧರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ವಿಷ ಸೇವನೆಯಿಂದ ಸುಮಾರು 600 ನಾಯಿಗಳು ಸಾವನ್ನಪ್ಪಿವೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST