LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ

Advertisement
ಬೆಂಗಳೂರು: ರಾಜ್ಯದಲ್ಲಿ ಬಹುದಿನಗಳಿಂದ ಚರ್ಚೆಯಾಗುತ್ತಿರುವ ಪರಿಶಿಷ್ಟ ಜಾತಿಗಳ (SC) ಒಳ ಮೀಸಲಾತಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಮಹತ್ವದ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.

ಒಳ ಮೀಸಲಾತಿ ವರ್ಗೀಕರಣದ ಕುರಿತು ಪರಿಷ್ಕೃತ ವರದಿ ನೀಡಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ತಾಂತ್ರಿಕ ಸಮಿತಿಯ ವರದಿ ಇಂದು ಸಂಪುಟದ ಮುಂದೆ ಬರಲಿದೆ.

ನ್ಯಾಯಾಲಯದ ಆದೇಶದನ್ವಯ ಒಟ್ಟು ಮೀಸಲಾತಿಯನ್ನು 50% ಕ್ಕೆ ಸೀಮಿತಗೊಳಿಸಬೇಕಾದ ಹಿನ್ನೆಲೆಯಲ್ಲಿ, ಎಸ್‌ಸಿ ಸಮುದಾಯಕ್ಕೆ ನೀಡಲಾಗುತ್ತಿದ್ದ 17% ಬದಲಿಗೆ 15% ರಷ್ಟು ಮೀಸಲಾತಿಯಲ್ಲಿ ಒಳ ವರ್ಗೀಕರಣ ಮಾಡುವ ಸಾಧ್ಯತೆಯಿದೆ.

ಪ್ರಸ್ತಾವಿತ ಹಂಚಿಕೆ: ಮೂಲಗಳ ಪ್ರಕಾರ, ಎಸ್‌ಸಿ ಸಮುದಾಯದ ವಿವಿಧ ಗುಂಪುಗಳಿಗೆ ಈ ಕೆಳಗಿನಂತೆ ಮೀಸಲಾತಿ ಹಂಚಿಕೆಯಾಗುವ ನಿರೀಕ್ಷೆಯಿದೆ:

ಗುಂಪು 'ಎ' (ಎಡಗೈ): 5.3

ಗುಂಪು 'ಬಿ' (ಬಲಗೈ): 5.3%

ಗುಂಪು 'ಸಿ' (ಲಂಬಾಣಿ, ಭೋವಿ ಇತ್ಯಾದಿ): 4.4%

ಹಿನ್ನೆಲೆ:

ಕಳೆದ ಮಾರ್ಚ್ 27 ರಂದು ಈ ಕುರಿತು ಸಭೆ ನಿಗದಿಯಾಗಿದ್ದರೂ, ಉಪಚುನಾವಣೆಗಳ ಕಾರಣದಿಂದ ಮುಂದೂಡಲಾಗಿತ್ತು. ಸುಮಾರು ಮೂರು ದಶಕಗಳ ಹೋರಾಟ ಮತ್ತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿಯ ಆಧಾರದ ಮೇಲೆ 101 ಉಪಜಾತಿಗಳಿಗೆ ನ್ಯಾಯ ಒದಗಿಸಲು ಸರ್ಕಾರ ಈ ಮಹತ್ವದ ಹೆಜ್ಜೆ ಇರಿಸಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST