LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Technology News

ಐಫೋನ್ 17 ಖರೀದಿಗಾಗಿ ಮಳಿಗೆ ಮುಂದೆ ಸಾರ್ವಜನಿಕರ ಹೊಡೆದಾಟ

Advertisement
ಮುಂಬೈ: ಶುಕ್ರವಾರದಂದು ಆಪಲ್‌ನ ಐಫೋನ್ 17 ಸರಣಿಯ ಬಿಡುಗಡೆಯ ಸಂದರ್ಭದಲ್ಲಿ ಮುಂಬೈ , ದೆಹಲಿಯ ಆಪಲ್ ಸ್ಟೋರ್‌ಗಳ ಹೊರಗೆ ಭಾರಿ ಜನಸಂದಣಿ ಸೇರಿತ್ತು.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಕಟ್ಟಡದಲ್ಲಿ ಭಾರೀ ಜನದಟ್ಟಣೆ ಇದ್ದು, ಸರತಿ ಸಾಲಿನಲ್ಲಿ ಕಾಯುತ್ತಿದ್ದ ಕೆಲವು ಜನರ ನಡುವೆ ಜಗಳ ಹಾಗೂ ಹೊಡೆದಾಟ ಏರ್ಪಟ್ಟಿತ್ತು.

ಈ ಗದ್ದಲದಿಂದಾಗಿ ಸರದಿಯಲ್ಲಿ ನಿಂತಿದ್ದವರ ಸಮಯ ಅಸ್ತವ್ಯಸ್ತವಾಯಿತು. ತಕ್ಷಣ ಆಪಲ್ ಸ್ಟೋರ್‌ನಲ್ಲಿ ನಿಯೋಜಿಸಲಾಗಿದ್ದ ಕಾವಲುಗಾರರು ಮಧ್ಯಪ್ರವೇಶಿಸಿ ಕ್ರಮ ಕೈಗೊಂಡರು.

ಆದರೆ ವಾಗ್ವಾದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆಯ ಹೊರತಾಗಿಯೂ, ಐಫೋನ್‌ 17 ಸರಣಿಯನ್ನು ಖರೀಸಿದ ಗ್ರಾಹಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಆಪಲ್ ಬಿಡುಗಡೆ ಮಾಡಿದ ಐಫೋನ್ 17 ಸರಣಿಯ ಬೆಲೆ 82,900 ರೂ. ಯಿಂದ 2,29,900 ರೂ. ವರೆಗೆ ಇದ್ದು, ಸೆಪ್ಟೆಂಬರ್ 19 ರಂದು ಭಾರತದಲ್ಲಿ ಮುಂಗಡ ಬುಕ್ ಮಾಡಿದ ಮತ್ತು ವಾಕ್-ಇನ್ ಖರೀದಿದಾರರಿಗೆ ಮಾರಾಟಕ್ಕೆ ಬಂದಿದೆ.

ಮುಂಬೈನ ಮೊದಲ ಗ್ರಾಹಕರಲ್ಲಿ ಒಬ್ಬರಾದ ಅಮನ್ ಮೆಮನ್ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ನನ್ನ ಕುಟುಂಬ ಮತ್ತು ನನಗಾಗಿ ಮೂರು ಐಫೋನ್‌ಗಳನ್ನು ಖರೀದಿಸಿದ್ದೇನೆ.

ಆಪಲ್ ಈ ವರ್ಷ ಉತ್ತಮ ವಿನ್ಯಾಸವನ್ನು ಬಿಡುಗಡೆ ಮಾಡಿದೆ ಮತ್ತು ಈ ವರ್ಷ ಫೋನ್‌ನ ಬಣ್ಣವೂ ತುಂಬಾ ವಿಭಿನ್ನವಾಗಿದೆ. ಇದು ನನ್ನ ನೆಚ್ಚಿನ ಬಣ್ಣ, ಅದಕ್ಕಾಗಿಯೇ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ