LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬೈಲಹೊಂಗಲ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಪ್ರಕರಣ : ಮೃತರ ಸಂಖ್ಯೆ 8ಕ್ಕೆ ಏರಿಕೆ

Advertisement
ಬೆಳಗಾವಿ : ಬೈಲಹೊಂಗಲ ತಾಲೂಕಿನ ಮುರಕುಂಬಿ ಗ್ರಾಮದ ಇನಾಂದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಬಾಯ್ಲರ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಐವರು ಗುರುವಾರ ಮೃತಪಟ್ಟಿದ್ದಾರೆ. ಇದರಿಂದಾಗಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿದೆ.

ಬಾಗಲಕೋಟೆಯ ಅಕ್ಷಯ ಸುಭಾಷ ಚೋಪಡೆ (48), ಬೈಲಹೊಂಗಲದ ದೀಪಕ ನಾಗಪ್ಪ ಮುನ್ನೋಳಿ ( 31), ಖಾನಾಪುರದ ಸುದರ್ಶನ ಮಹಾದೇವ ಬನೋಶಿ (25), ಬೈಲಹೊಂಗಲದ ಮಂಜುನಾಥ ಮಡಿವಾಳ, ಅಥಣಿಯ ಮಂಜುನಾಥ ಗೋಪಾಲ, ಬಾಗಲಕೋಟೆಯ ಗುರುಪಾದಪ್ಪ ತಮ್ಮಣ್ಣವರ (26), ಗೋಕಾಕದ ಭರತೇಶ ಬಸಪ್ಪ ಸರವಾಡೆ (27) ಮೃತಪಟ್ಟ ಕಾರ್ಮಿಕರು.

ಅವಘಡ ಸಂಭವಿಸಿ ದಿನ ಕಳೆದರೂ ಪರಿಹಾರ ಘೋಷಿಸಿಲ್ಲ

ಈ ಮಧ್ಯೆ, ಅವಘಡ ಸಂಭವಿಸಿ ದಿನ ಕಳೆದರೂ ಕಾರ್ಖಾನೆಯ ಆಡಳಿತ ಮಂಡಳಿಯವರು ಪರಿಹಾರ ಘೋಷಿಸಿಲ್ಲ, ಆಸ್ಪತ್ರೆಗೆ ಭೇಟಿ ನೀಡಿಲ್ಲ, ಸಂತಾಪ ಕೂಡ ಸೂಚಿಸಿಲ್ಲ ಎಂದು ಮೃತ ಕಾರ್ಮಿಕ ಗುರು ತಮ್ಮಣ್ಣನವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ, ಶವಾಗಾರದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST