LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಬಾಗಲಕೋಟೆಯಲ್ಲಿ ಆಗಿರುವುದು ಹಿಂದೂಗಳ ಮೇಲಿನ ದಬ್ಬಾಳಿಕೆ : ಛಲವಾದಿ ನಾರಾಯಣಸ್ವಾಮಿ

Advertisement

ಬೆಂಗಳೂರು: ಬಾಗಲಕೋಟೆಯಲ್ಲಿ ಆಗಿರುವುದು ಹಿಂದೂಗಳ ಮೇಲಿನ ದಬ್ಬಾಳಿಕೆ. ಇದನ್ನು ಸಹಿಸಲಾಗದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.


ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಈಗ ಶಾಂತಿ ಸಭೆಗೆ ಕರೆದರೂ ಕೆಲವರು ಬರುತ್ತಿಲ್ಲ.ಇದಕ್ಕೆ ಈಗಿನ ಸರಕಾರವೇ ಕಾರಣ ಎಂದು ದೂರಿದರು. ಚಿತ್ತಾಪುರದಲ್ಲಿ ನಡೆದಿದೆ ಎಂದರೆ ಚಿತಾವಣೆ ಯಾರು ಎಂದು ಕೇಳಿದರು.

ಇದಕ್ಕೆಲ್ಲ ಚಿತ್ತಾಪುರದ ಶಾಸಕರಾದ ಪ್ರಿಯಾಂಕ್ ಖರ್ಗೆಯವರೇ ಏನೋ ಮಾಡಿಸುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ಸ್ಥಳೀಯ ಕೆಲವರು ತಿಳಿಸಿದ್ದಾಗಿ ಹೇಳಿದರು.

ಇಂಥ ಚಿತಾವಣೆ ಮಾಡುವವರಿಗೆ ಪ್ರತಿಯೊಬ್ಬರಿಗೂ ಶಿಕ್ಷೆ ಆಗಬೇಕು. ಜನರು ಹೇಳುತ್ತಿರುವುದು ಸರಿಯೇ? ನೀವು ಹಿಂದೂಗಳನ್ನು ಯಾಕೆ ಟಾರ್ಗೆಟ್ ಮಾಡುತ್ತೀರಿ ಎಂಬುದಕ್ಕೆ ಪ್ರಿಯಾಂಕ್ ಖರ್ಗೆಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಈ ಸರಕಾರವು ಇಂಥವುಗಳಿಗೆ ಪ್ರೋತ್ಸಾಹ ಕೊಡುವ ರೀತಿಯಲ್ಲಿ ಅಲ್ಪಸಂಖ್ಯಾತರ ಹೆಸರಿನಲ್ಲಿ, ನಮ್ಮ ಮತಬ್ಯಾಂಕ್ ಎಂಬ ಕಾರಣಕ್ಕೆ ಓಲೈಕೆ ಮಾಡುತ್ತ ಹೋದರೆ ಈ ರಾಜ್ಯಕ್ಕೆ ಮತ್ತು ದೇಶಕ್ಕೆ ಗಂಡಾಂತರ ಇದೆ ಎಂದು ವಿಶ್ಲೇಷಿಸಿದರು.

ನಾನು ಎಲ್ಲ ಮುಸ್ಲಿಮರನ್ನು ನಿಂದಿಸುವುದಿಲ್ಲ. ನಾನು ಎಲ್ಲ ಮುಸ್ಲಿಮರನ್ನು ನಿಂದಿಸುವುದಿಲ್ಲ. ಉಳಿದವರಿಗೆ ನೋವು ಕೂಡ ಆಗಬಹುದು.

ಯಾರು ಈ ಕೃತ್ಯಗಳಲ್ಲಿ ಭಾಗಿಯಾಗುತ್ತಾರೋ ಅವರು ಮಾತ್ರ. ನಾಲ್ಕು ಜನ ಮಾಡುವ ಕೃತ್ಯಗಳಿಂದ ನಮ್ಮ ಸಮುದಾಯಕ್ಕೆ ಇವತ್ತು ಕೆಟ್ಟ ಹೆಸರು ಬರುತ್ತಿದೆ ಎಂದು ಅನೇಕರು ಮಾತನಾಡುತ್ತಾರೆ.

ಆದ್ದರಿಂದ ನಾನು ಸಾರಾಸಗಟಾಗಿ ಮುಸಲ್ಮಾನರನ್ನು ವಿರೋಧಿಸುವುದಿಲ್ಲ. ಈ ಕೃತ್ಯಗಳಲ್ಲಿ ಇರುವವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಒತ್ತಾಯಿಸಿದರು.

 

 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST