LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಅರಿಸಿನ ಕುಂಕುಮ ಕೊಡಲು ಯಾರು ಇಲ್ಲವೆಂದು ಗೃಹಣಿ ಆತ್ಮಹತ್ಯೆ 

Advertisement
ಕೊಳ್ಳೇಗಾಲ: ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ದಿನದಂದು ತವರು ಮನೆಗೆ ಕರೆಯಲು ಯಾರೂ ಇಲ್ಲವೆಂದು ಗೃಹಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಸಿದ್ದರಾಜು ಅವರ ಪತ್ನಿ ರಶ್ಮಿ (32) ಆತ್ಮಹತ್ಯೆ ಮಾಡಿಕೊಂಡವರು. ಈಕೆಯ ತಂದೆ, ತಾಯಿ ಹಾಗೂ ಅಣ್ಣ ಮೃತಪಟ್ಟಿದ್ದಾರೆ.

'ಗೌರಿ ಗಣೇಶ ಹಬ್ಬದಂದು ಅರಿಸಿನ ಕುಂಕುಮ ಕೊಡಲು ಯಾರು ಇಲ್ಲ' ಎಂದು ಮನನೊಂದು ಮನೆಯಲ್ಲಿ ಪೂಜೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಗಾರದಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST