LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಈಜಿಪ್ಟ್ ನ ಸಮುದ್ರದಾಳದಲ್ಲಿ 2 ಸಾವಿರ ವರ್ಷದ ಹಳೆ ಪ್ರತಿಮೆ ಪತ್ತೆ

Advertisement
ಈಜಿಪ್ಟ್ ನ ಸಮುದ್ರದಾಳದಲ್ಲಿ 2 ಸಾವಿರ ವರ್ಷ ಹಳೆಯ ಪ್ರತಿಮೆ ಪತ್ತೆಯಾಗಿದೆ. ಸಮುದ್ರದ ಕೆಳಕ್ಕೆ ಕಲ್ಲಿನ ಕಟ್ಟಡ, ಕಲ್ಲು ಕೆತ್ತನೆಯ ಕೊಳ, ಪ್ರಾಚೀನ ನೀರು ಸಂಗ್ರಹಣೆ ಕೊಳ, ಕೃಷಿಗಾಗಿ ಬಳಸಲಾಗುತ್ತಿದ್ದ ಜಲಾಶಯಸೇರಿದಂತೆ ಇನ್ನಿತರ ಪ್ರಾಚೀನ ವಸ್ತುಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.

ನೀರಿನ ಅಡಿಯಲ್ಲಿ ಪತ್ತೆಯಾದ ಮೂರ್ತಿಗಳು, ಪ್ರತಿಮೆಗಳನ್ನು ಪುರಾತತ್ವಶಾಸ್ತ್ರಜ್ಞರು ಹೊರಕ್ಕೆ ತೆಗೆದಿದ್ದು, ಕೆಲವೊಂದನ್ನು ಹೊರತೆಗೆಯಲು ಅಸಾದ್ಯ ಎಂದು ತಿಳಿಸಿದ್ದಾರೆ.

ಅಲೆಕ್ಸಾಂಡ್ರಿಯಾ ಬಳಿಯ ಅಬು ಕಿರ್ ಕೊಲ್ಲಿಯ ಕರಾವಳಿಯಲ್ಲಿ ಸುಮಾರು 2000 ವರ್ಷ ಹಳೆಯ ಕಲಾಕೃತಿಯೊಂದನ್ನು ಹುಡುಕಿ ಹೊರಕ್ಕೆ ತೆಗೆಯಲಾಗಿದೆ.‌

ಈ ಪ್ರತಿಮೆ ಟಾಲೆಮಿಕ್, ಅಥವಾ ರೋಮ್ ಅವಧಿಗೂ ಹಳೆಯದ್ದಾಗಿದ್ದು, ಇದೊಂದು ಪಾದ್ರಿಯ ಆಕೃತಿ ಎಂದು ಹೇಳಲಾಗುತ್ತಿದೆ‌ ಆದರೆ ಈ ಕಲಾಕೃತಿಯ ತಲೆಯ ಭಾಗ ತುಂಡಾಗಿದೆ.

ಸಾವಿರಾರು ವರ್ಷಗಳಿಂದ ಸಮುದ್ರದ ನೀರಿನ ಒಳಗೆಯೇ ಇದ್ದಿದ್ದರಿಂದ ಆಕೃತಿಯ ಆಕಾರ ವಿರೂಪಗೊಂಡಿದೆ. ಕ್ರೇನ್ ಮೂಲಕ ಸಮುದ್ರದಿಂದ ಹೊರತೆಗೆಯಲಾಗಿದೆ.

ಈ ಪ್ರತಿಮೆಗಳನ್ನು ಹೊರಕ್ಕೆ ತೆಗೆಯಲು ಸುಮಾರು ಒಂದು ದಿನಕ್ಕೂ ಹೆಚ್ಚಿನ ಕಾರ್ಯಾಚರಣೆ ನಡೆಯಿತು. ಇಲ್ಲಿ ಸಿಕ್ಕ ಪ್ರತಿಮೆಗಳನ್ನು ಅಲೆಕ್ಸಾಂಡ್ರಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ