Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

BSI ಯಿಂದ ಪೂರ್ವಭಾವಿ ಸಭೆ

Advertisement
 ಕಾಳಗಿ :-ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಎಸ್ಐ ವತಿಯಿಂದ ಪೂರ್ವಭಾವಿ ಸಭೆ ನಡೆಸಲಾಯಿತು ಈ ಸಂಧರ್ಭದಲ್ಲಿ ಸೂರ್ಯಕಾಂತ ನಿಂಬಳಕರ್ ಬಿಎಸ್ಐ ರಾಜ್ಯಾಧ್ಯಕ್ಷರು,ಮಾತನಾಡಿದರು,
ಜಗತ್ತಿನ ಧರ್ಮಗಳಲ್ಲಿ ವೈಜ್ಞಾನಿಕ ನೈಸರ್ಗಿಕ ತಳಹದಿಯ ಮೇಲೆ ಬೌದ್ಧ ಧರ್ಮವೊಂದೇ ಶ್ರೇಷ್ಠ ಮಾನವ ಧಮ್ಮಯಾಗಿದೆ,ಯಾಕೆಂದರೆ ಸಕಲ ಮಾನವರ ಕಲ್ಯಾಣವೇ ಈ ಧಮ್ಮದ ಗುರಿಯಾಗಿದೆ.



ಬುದ್ಧ ಧಮ್ಮ ಜಗತ್ತಿನ ಮಹಾನ ಬೆಳಕು, ಅಜ್ಞಾನದ ಕತ್ತಲೆಯಿಂದ ಮುಕ್ತರಾಗಲು ಬೌದ್ದ ಧಮ್ಮ ಬೇಕಾಗಿದೆ, ಆದ್ದರಿಂದ ಪರಿವರ್ತನೆ ಎಂಬುದು ಅಷ್ಟು ಸರಳವಾಗಿ ಬರಲು ಸಾಧ್ಯವಿಲ್ಲ, ಪರಿವರ್ತನೆಯ ಮೊದಲೇ ಹೆಜ್ಜೆ ನಮ್ಮಿಂದಲೇ ತಮ್ಮ ತಮ್ಮ ಮನೆಯಿಂದಲೇ ಪ್ರಾರಂಭಿಸಬೇಕಾಗಿದೆ, ಆದ್ದರಿಂದ ಅಕ್ಟೋಬರ್ 13 ಮತ್ತು 14ನೇ ತಾರೀಕು ದಂದು ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಕಲಬುರಗಿ ವಿಭಾಗ ಮಟ್ಟದ 68ನೇ ಧಮ್ಮ ಚಕ್ರ ಪ್ರವರ್ತನಾ ದಿನದ ಅಂಗವಾಗಿ ಧಮ್ಮ ಧೀಕ್ಷಾ ಸಮಾರಂಭ ನಡೆಯುತ್ತದೆ .



ಈ ಸಮಾರಂಭದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೌದ್ಧ ಧೀಕ್ಷಾ ಪಡೆದು ಪರಿಶುದ್ಧವಾದ ಬದುಕು ಕಟ್ಟಿಕೊಳ್ಳಲು ಯಶಸ್ವಿಯಾಗೋಣ ಎಂದು ಕಾಳಗಿ ತಾಲೂಕಿನ ಜನತೆಗೆ ಕರೆ ನೀಡಿದರು,ಮತ್ತು ಚಿತ್ತಾಪುರ ತಾಲೂಕಿನ ಸನ್ನತಿ ಯಲ್ಲಿರುವ ಬುದ್ಧ ವಿಹಾರದ ಕುರಿತು ಮಾತನಾಡಿದರು.

ನಂತರ ಧಮ್ಮದ ಕುರಿತು ಕಲ್ಯಾಣರಾವ್ ಡೊಣ್ಣೂರ್,ಗುರುನಂದೇಶ್ ಕೋಣಿನ್,ಭಾರತ್ ಬುಳ್ಳ ದಿನೇಶ್ ಮೋಘಾ,ಗಂಗಾಧರ್ ಮಾಡಬುಳ್ ಸಹ ಮಾತನಾಡಿದರು,ಈ ಸಂಧರ್ಭದಲ್ಲಿ,ರಾಜಕುಮಾರ ಕಪನೂರ್, ಮೈತ್ರಿ ಪೌಂಡೇಶನ್ ಅಧ್ಯಕ್ಷರಾದ ಪ್ರಕಾಶ್ ಎಮ್ ಅವರಾದಕರ್,ದೇವಿಂದ್ರ ಸಿನೂರ್, S.S.ತಾವಾಡೆ, ಸುರೇಶ ಕಾನೆಕರ್, ಬಸವರಾಜ್ ಪಾಸ್ವನ್, ರಾಜಕುಮಾರ ಕೊರಳ್ಳಿ,ಹಾಗೂ ತಾಲೂಕಿನ ಪ್ರಮುಖ ಮುಖಂಡರುಗಳು, ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.

ವರದಿ : ಹಣಮಂತ ಕುಡಹಳ್ಳಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್ವಸತಿ ಶಾಲೆ ವಿದ್ಯಾರ್ಥಿಗಳ ರಾಗಿಂಗ್‌ : ಬೆಲ್ಟ್ ನಿಂದ ಹಲ್ಲೆ ಸಂಪೂರ್ಣ ಮೌನಕ್ಕೆ ಶರಣಾದ ನಟ ದರ್ಶನ್, ಇತ್ತ ಆತ್ಮಚರಿತ್ರೆ ಬರೆಯುತ್ತಿರುವ ಪವಿತ್ರಾ ಗೌಡ ತೆಂಗಿನಕಾಯಿ ತಲೆಯ ಮೇಲೆ ಬಿದ್ದು ಬಾಲಕ ಸಾವು