LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಉತ್ತರಾಖಂಡ ‘ಸಾಹು’ ನ ಹೇಳಿಕೆಗೆ ತೀವ್ರ ವಿರೋಧ

Advertisement
---------------------------------ಮಹಿಳೆಯರ ಕುರಿತು ಅವಹೇನಕಾರಿ ಪದ ಬಳಕೆ

ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ತಮ್ಮ ಸಣ್ಣತನವನ್ನು ಪ್ರದರ‍್ಶಿಸುವ ಹಾಗೂ ವ್ಯಾಪಕ ಟೀಕೆಗೆ ಗುರಿಯಾಗುವ ವ್ಯಕ್ತಿಗಳಿಗೆ ನಮ್ಮ ಸಮಾಜದಲ್ಲಿ ಕಡಿಮೆ ಇಲ್ಲ.
ಇಂಥ ಬಾಯಿ ಚಪಲದ ವ್ಯಕ್ತಿಗಳು ನಮಲ್ಲಿ ತುಂಬಾನೇ ಇದ್ದಾರೆ. ಈ ಸಾಲಿನಲ್ಲಿ ಮತ್ತೊರ‍್ವ ಗಿರಾಕಿ ನಮಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಗುರಿಯಾದವರೆಂದರೆ ಉತ್ತರಾಖಂಡದ ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ರ‍್ಯ ಅವರ ಪತಿ ಗರ‍್ಧಾರಿ ಲಾಲ್ ಸಾಹು ಅವರೇ ಈ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಒಂದು ರಾಜ್ಯದ ಜವಾಬ್ದಾರಿ ಖಾತೆ ಹೊಂದಿರುವ ಸಚಿವೆಯೊಬ್ಬರ ಪತಿಯಾಗಿ ಇಂಥ ಬೇಕಾಬಿಟ್ಟಿ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಸಾಹು. ಸರ‍್ವಜನಿಕ ಕರ‍್ಯಕ್ರಮವೊಂದರಲ್ಲಿ ತಮ್ಮ ಬಾಯಿ ಚಪಲ ತೋರಿದ ಸಾಹು, ೨೦,೦೦೦ ರಿಂದ ೨೫,೦೦೦ ರೂ.ಗೆ ಬಿಹಾರದ ಹುಡುಗಿಯರನ್ನು ಮದುವೆ ವ್ಯವಸ್ಥೆ ಮಾಡಬಹುದು ಎಂದು ಹೇಳಿಕೆ ನೀಡುವ ಮೂಲಕ ಉತ್ತರಾಖಂಡದ ಈ ಮಹಾಶಯ ತಮ್ಮ ಬಾಯಿ ಚಪಲ ಸಮಾಜಕ್ಕೆ ತೋರಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಸರ‍್ವಜನಿಕ ಕರ‍್ಯಕ್ರಮವೊಂದರಲ್ಲಿ ಈ ಉಡಾಫೆ ಹೇಳಿಕೆ ನೀಡಿರುವ ಈ ಮಹಾಶಯ, ನನ್ನೊಂದಿಗೆ ಬನ್ನಿ ಬಿಹಾರದ ಹುಡುಗಿಯರನ್ನು ಇಷ್ಟು ಹಣಕ್ಕೆ ನಾನು ಮದುವೆ ಮಾಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ ಈ ಮಹಾಶಯ. ‘ಸಾಹು’ ನ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮಹಿಳಾ ಸಂಘಗಳು ಸಾಹು ನ ಹೇಳಿಕೆಗೆ ಕೆರಳಿ ಕೆಂಡವಾಗಿವೆ.
ಇನ್ನಾದರೂ ಇಂಥ ಮಹಾಶಯವರು ತಮ್ಮ ಬಾಯಿ ಚಪಲದ ಚಟ ಬಿಟ್ಟು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕಾಗಿದೆ. ಸಮಾಜದಲ್ಲಿ ನಾವು ಮಹಿಳೆಯರಿಗೆ ಗೌರವದ ಸ್ಥಾನ ನೀಡಬೇಕೆಂದು ಇಂಥವರಿಗೆ ಎಂದು ಜ್ಞಾನ ಬರುವುದು ಎಂದು ಕಾಯಬೇಕಾಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ