Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಾವಗಡದಲ್ಲಿ ಮರಳು ಮಾಫಿಯಾ ಅಟ್ಟಹಾಸ

Advertisement
ಅಧಿಕಾರಿಗಳ ಕಣ್ಣೆದುರೇ ನದಿಗೆ ಕನ್ನ: ಪಿನಾಕಿನಿ ಮರಳು ಲೂಟಿ ಮಾಡುತ್ತಿರುವ 'ಮಹೇಂದ್ರ' ಮೃಗಗಳು!

ಪಾವಗಡ : ಶಾಂತಿ ಪ್ರಿಯ ಪಾವಗಡ ತಾಲೂಕಿನಲ್ಲಿ ಈಗ ಮರಳು ಮಾಫಿಯಾದ್ದೇ ಕಾರುಬಾರು.

ಕತ್ತಲಾಗುತ್ತಿದ್ದಂತೆ ಶುರುವಾಗುವ ಈ ಮರಳು ದಂದೆ, ಬೆಳ್ಳಂಬೆಳಗ್ಗೆ ಸೂರ್ಯ ಹುಟ್ಟುವವರೆಗೂ ಅವ್ಯಾಹತವಾಗಿ ಸಾಗುತ್ತಿದೆ. ಉತ್ತರ ಪಿನಾಕಿನಿ ನದಿಯ ಒಡಲನ್ನು ಬಗೆಯುತ್ತಿರುವ ಕಿರಾತಕರು, ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಸುಣ್ಣ ಬಳಿಯುತ್ತಿದ್ದಾರೆ.

​ಇಂದು ಮುಂಜಾನೆ 5:30ರ ಸುಮಾರಿಗೆ ಪಳವಳ್ಳಿ ರಸ್ತೆಯ ತಿಮ್ಮಾಪುರ ಗ್ರಾಮದಿಂದ ಪಾವಗಡ ಪಟ್ಟಣಕ್ಕೆ ಅಗ್ನಿಶಾಮಕ ದಳದ ಕಚೇರಿ ಮಾರ್ಗವಾಗಿ ಅಕ್ರಮ ಮರಳು ಹೊತ್ತ ಮಹೇಂದ್ರ ಟ್ರ್ಯಾಕ್ಟರ್ (ಸಂಖ್ಯೆ: KA 06 TC 8547) ರಾಜಾರೋಷವಾಗಿ ನುಗ್ಗಿದೆ.
​ಡ್ರೈವರ್ ಅತಿರೇಕ: ಒಂದು ಕೈಯಲ್ಲಿ ಸ್ಟೀರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್! ಸಾರ್ವಜನಿಕರ ಪ್ರಾಣದ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ, ಮೊಬೈಲ್‌ನಲ್ಲಿ ಮಾತನಾಡುತ್ತಲೇ ಮರಳು ಸಾಗಿಸುತ್ತಿದ್ದ ದೃಶ್ಯ ಮೈ ನಡುಗಿಸುವಂತಿತ್ತು.


​ ಅಧಿಕಾರಿಗಳೇ, ಇದು ನಿಮ್ಮ 'ಕುಂಭಕರ್ಣ' ನಿದ್ದೆಯೇ ಅಥವಾ ಕುಮ್ಮಕ್ಕೇ?
​ಪಾವಗಡ ಪಟ್ಟಣದಲ್ಲಿ ಇರುವ ನಗರ ಪೊಲೀಸ್ ಠಾಣೆ. ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಹಾಗೂ ಭೂ ವಿಜ್ಞಾನ ಇಲಾಖೆಯ. ಮತ್ತು ಆರ್ ಟಿ ಓ ಇಲಾಖೆಯ ಅಧಿಕಾರಿಗಳಿಗೆ ಈ ದಂದೆಯ ಸಂಪೂರ್ಣ ಮಾಹಿತಿ ಇದ್ದರೂ, 'ನೋಡದವರಂತೆ' ಮೌನಕ್ಕೆ ಶರಣಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
​"ನದಿಯ ಮರಳು ಲೂಟಿಯಾಗುತ್ತಿದ್ದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಯಾಕೆ?

ಪ್ರತಿ ಟ್ರ್ಯಾಕ್ಟರ್‌ಗೆ ಇಂತಿಷ್ಟು ಅಂತ ಫಿಕ್ಸ್ ಆಗಿದೆಯೇ?" - ಇದು ಸಾರ್ವಜನಿಕರ ನೇರ ಪ್ರಶ್ನೆ.

​ಇಷ್ಟೆಲ್ಲಾ ಸಾಕ್ಷ್ಯಧಾರಗಳು ಕಣ್ಣಮುಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಬೀದಿಗಿಳಿಯುವುದು ಖಚಿತ.ವಾಹನ ಸಂಖ್ಯೆ KA 06 TC 8547 ಮಾಲೀಕ ಹಾಗೂ ಚಾಲಕನ ವಿರುದ್ಧ ಕೂಡಲೇ FIR ದಾಖಲಾಗಲಿ.
​ಅಕ್ರಮ ಸಾಗಾಣಿಕೆಗೆ ಸಾಥ್ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ತನಿಖೆ ನಡೆಸಲಿ.

​ವರದಿ: ಶಿವಾನಂದ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್