Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನಿಂದ ಮಾ.೬ ವರಿಗೆ ಮಾಣಿಕಪ್ರಭು ಜಾತ್ರೆ

Advertisement
ಐಗಳಿ : ಇಂದಿನಿಂದ ಮಾ. ೬ ರ ವರೆಗೆ ಐಗಳಿ ಕ್ರಾಸ ದಲ್ಲಿರುವ ಶ್ರೀ ಮಾಣಿಕಪ್ರಭು ವಿರಕ್ತಮಠದ ಜಾತ್ರಾ ಮಹೋತ್ಸವವು ಹಾಗೂ ಗ್ರಾಮ ಪಂಚಾಯತ, ತಾಲೂಕು ಪಂಚಾಯತ, ಅಥಣಿ ಎಪಿಎಂಸಿ, ಪಶುಸಂಗೋಪನಾ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಪ್ರಮಾಣದ ದನಗಳ ಪ್ರದರ್ಶನವು ಜರುಗಲಿದೆ.

ಸೋಮವಾರ ದಿ. ೨ ರಂದು ಮುಂಜಾನೆ ಪೂಜಾ ಹಾಗೂ ಪೂಜ್ಯಶ್ರೀ ಅಭಿನವ ರಾಚೋಟೇಶ್ವರ ದೇವರ ನೇತೃತ್ವದಲ್ಲಿ ಆಧ್ಯಾತ್ಮಿಕ ಪ್ರವಚನದೊಂದಿಗೆ ಜಾತ್ರೆ ಪ್ರಾರಂಭವಾಗಿ, ರಾತ್ರಿ ಬುರ್ಲಟ್ಟಿ ಹಾಗೂ ವಿವಿಧ ಗ್ರಾಮದವರಿಂದ ಭಜನೆ ಮನರಂಜನೆ ಕಾರ್ಯಕ್ರಮ ಇರುವವು. ಮಂಗಳವಾರ ದಿ ೩ ರಂದು ರುದ್ರಾಭಿಷೇಕ, ಭಕ್ತರಿಂದ ದೀರ್ಘದಂಡ ನಮಸ್ಕಾರ, ನೈವೆಧ್ಯ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಪದಗಳು, ಸಂಜೆ ೪ ಗಂಟೆಗೆ ಕಡುಬಿನ ಕಾಳಗ ಹಾಗೂ ಪಲ್ಲಕ್ಕಿ ಉತ್ಸವ, ರಾತ್ರಿ ವೀರ ಸಿಂಧೂರ ಲಕ್ಷ್ಮಣ ಬೈಲಾಟ, ಮುಧೋಳ ಗ್ರಾಮದವರಿಂದ ಸಂಗ್ಯಾ ಬಾಳ್ಯಾ ಬೈಲಾಟ ಇರುವದು. ಬುದವಾರ ದಿ ೪ ರಂದು ಮುಂ ೮ ರಿಂದ ೧೧ ರವರೆಗೆ ದನಗಳ ಪಾಸ ಆರಿಸುವದು, ಸಂಜೆ ೪ ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಭವ್ಯ ರಥೋತ್ಸವ, ಅನ್ನ ಪ್ರಸಾದ, ಸಂಜೆ ಕೀರ್ತನೆ, ಭಜನೆ, ರಾತ್ರಿ ಲವಕುಶ ಪೌರಾಣೀಕ ಬೈಲಾಟ ಇರುವದು. ಗುರುವಾರ ದಿ ೫ ರಂದು ಮಧ್ಯಾಹ್ನ ೧ ಕ್ಕೆ ಸರಪಳಿ ಹರಿಯುವ ಕಾರ್ಯಕ್ರಮ, ೨ ಕ್ಕೆ ಅಗ್ನಿ ಪ್ರವೇಶ, ಪಾರಿತೋ಼ಷಕ ವಿತರಣಾ ಸಮಾರಂಭ, ರಾತ್ರಿ ೮ ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ ಇರುವದು. ಶುಕ್ರವಾರ ದಿ ೬ ರಂದು ಗೊಬ್ಬರ ನಿಲಾವು, ೩ ರಿಂದ ಸಂಜೆ ೫ ರವರೆಗೆ ಜಂಗಿ ಕುಸ್ತಿಗಳು ಜರುಗುವವು ಎಂದು ಪ್ರಕಟಣೆಯಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ಪ್ರಲ್ಹಾದ ಪಾಟೀಲ ತಿಳಿಸಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್