Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿ ರೈತರ ಜಮೀನು ಲೂಟಿ

Advertisement
ಬೆಳಗಾವಿಯಲ್ಲಿ ಅನ್ನದಾತನಿಗೆ ಬಿಗ್ ಶಾಕ್

​2 ವರ್ಷದ ಅಗ್ರಿಮೆಂಟ್... 20 ವರ್ಷಕ್ಕೆ ಎಡಿಟ್

​ಜಯ ಕರ್ನಾಟಕ ಸಂಘಟನೆಯಿಂದ ಭಾರಿ ಸ್ಫೋಟ

ಬೆಳಗಾವಿ :ಜಿಲ್ಲೆಯ ಖಾನಾಪುರದಲ್ಲಿ ಅನ್ನದಾತನಿಗೆ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸವಾಗಿದೆ! ಮುಗ್ಧ ರೈತರ ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಅವರ ಬದುಕಿನ ಆಧಾರವಾಗಿದ್ದ ಜಮೀನನ್ನೇ ಕಬಳಿಸಲು ಸ್ಕೆಚ್ ಹಾಕಿದ್ದಾರೆ. ಕೇವಲ 2 ವರ್ಷಕ್ಕೆ ಮಾಡಿಕೊಂಡಿದ್ದ ಕರಾರು ಪತ್ರ ಈಗ 20 ವರ್ಷಕ್ಕೆ ಬದಲಾಗಿದೆ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್."
​ ತೀರ್ಥಕುಂಡೆ ಗ್ರಾಮದ ಜಮೀನು, ಸಂತ್ರಸ್ತ ರೈತರು ಮತ್ತು ಜಯ ಕರ್ನಾಟಕ ಸಂಘಟನೆಯ ಪ್ರತಿಭಟನೆ/ಮನವಿ ಸಲ್ಲಿಸಿದರು "ಇವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ತೀರ್ಥಕುಂಡೆ ಗ್ರಾಮದ ತಾತೋಬಾ ವಿಠಲ್ ಖಾಮಕರ್ ಮತ್ತು ತುಕಾರಾಮ್ ವಿಠಲ್ ಖಾಮಕರ್. ಈ ರೈತರು ತಮ್ಮ 3 ಎಕರೆ ಜಮೀನನ್ನು ರಾಘವೇಂದ್ರ ರಮೇಶ್ ನಾಯ್ ಎಂಬ ವ್ಯಕ್ತಿಗೆ 15 ಲಕ್ಷ ರೂಪಾಯಿ ಬದಲಿಗೆ ಕೇವಲ 2 ವರ್ಷಗಳ ಕಾಲ ಕರಾರು ಮಾಡಿಕೊಟ್ಟಿದ್ದರು. ಆದರೆ ಇಂದು ಅದೇ ಜಮೀನು ಅವರ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ. ಏಕೆಂದರೆ, ಆ 2 ವರ್ಷದ ಅವಧಿಯನ್ನು ಆರೋಪಿ ರಾಘವೇಂದ್ರ ಎಂಬಾತ ದಾಖಲೆಗಳಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡಿ ಬರೋಬ್ಬರಿ 20 ವರ್ಷ ಎಂದು ಬದಲಿಸಿಕೊಂಡಿದ್ದಾನೆ!"

​ವಂಚನೆಯ ಜಾಲ 2 ವರ್ಷದ ಕರಾರು ಪತ್ರ 20 ವರ್ಷಕ್ಕೆ ಎಡಿಟ್!
​ಹೆಚ್ಚುವರಿ ಜಮೀನು ಕಬಳಿಕೆ: ಒಪ್ಪಂದಕ್ಕಿಂತ ಹೆಚ್ಚಿನ ಭೂಮಿ ಅಕ್ರಮ ವಶ.
​ರಾಜಕೀಯ ಪ್ರಭಾವ: ಪೊಲೀಸ್ ದೂರು ನೀಡಿದರೂ ಕ್ರಮ ಕೈಗೊಳ್ಳದ ಖಾನಾಪುರ ಪೊಲೀಸ್ ಇಲಾಖೆ.
​ ರೈತರ ಮುಗ್ಧತೆಯನ್ನು ಅಸ್ತ್ರವಾಗಿಸಿಕೊಂಡು ಈ ವಂಚನೆ ಮಾಡಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಗಂಭೀರ ಆರೋಪ ಮಾಡಿದೆ. ಕೇವಲ ಸಮಯದ ಬದಲಾವಣೆ ಮಾತ್ರವಲ್ಲ, ಒಪ್ಪಂದದಲ್ಲಿ ಇರುವುದಕ್ಕಿಂತ ಹೆಚ್ಚಿನ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂಬುದು ಸಂಘಟನೆಯ ವಾದ. ಈ ಬಗ್ಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಸಹ ಆರೋಪಿಯ ರಾಜಕೀಯ ಪ್ರಭಾವದಿಂದಾಗಿ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ."
​ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿ

ರೈತರಿಗೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ. ಹಣದ ಮದ ಮತ್ತು ರಾಜಕೀಯ ಪವರ್ ಬಳಸಿ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗುತ್ತಿದೆ. ತಕ್ಷಣವೇ ತನಿಖೆಯಾಗಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡಲಾಗುವುದು."

ವರದಿ : ಮಹಾಂತೇಶ್ ಎಸ್ ಹುಲಿಕಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್