LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬಸವ ತತ್ವಗಳು ಸಮಾಜಕ್ಕೆ ದಾರಿದೀಪ: ಬೆಳಗಾವಿಯಲ್ಲಿ 'ಬಸವಾದಿ ಶರಣರ ವಿಚಾರ ಸಂಕಿರಣ' ಯಶಸ್ವಿ

Advertisement

​ಬೆಳಗಾವಿ: ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ, ಮೇ 31, 2026 ರಂದು ಬಸವ ಧರ್ಮ ವೇದಿಕೆ (ಡಾ. ಜಿ. ಪರಮೇಶ್ವರ ಬ್ರಿಗೇಡ್ ಕರ್ನಾಟಕ) ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ "ಬಸವಾದಿ ಶರಣರ ವಿಚಾರ ಸಂಕಿರಣ" ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
​ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಭಲವಾಡಿ ಗುರುಪೀಠ ಚಿತ್ರದುರ್ಗದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬಸವನಾಗ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ, ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

news_1780319559_1_775.webp

 


​ಪೂಜ್ಯ ಶ್ರೀಗಳ ಆಶೀರ್ವಚನ: ​ನಂತರ ಶರಣರ ವಿಚಾರಗಳನ್ನು ಪ್ರಸ್ತಾಪಿಸಿ ಮಾತನಾಡಿದ ಪೂಜ್ಯ ಮಹಾಸ್ವಾಮಿಗಳು, "ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಅಪ್ಪಾಜಿಯವರು ಹಾಗೂ ಜಾನಪದ ಹಾಡುಗಾರರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಇಂತಹ ಮಹನೀಯರ ವಿಚಾರಧಾರೆಗಳನ್ನು ನೆನೆಯುವುದು ಮತ್ತು ಆ ಮೂಲಕ ಶರಣರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಾವೆಲ್ಲರೂ ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮ ಪುಣ್ಯವೇ ಸರಿ" ಎಂದು ಮಾರ್ಮಿಕವಾಗಿ ನುಡಿದರು.
​ಮುಖ್ಯ ಅತಿಥಿಗಳು ಮತ್ತು ಗಣ್ಯರ ಉಪಸ್ಥಿತಿ: ​ಕಾರ್ಯಕ್ರಮದಲ್ಲಿ ವಿಶೇಷ ಸನ್ಯಾನಿತರಾಗಿ ಬೆಂಗಳೂರಿನ 'ಕ್ರೈಂ ಪ್ರಪಂಚ' ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಶ್ರೀ ವಿ. ಬಸವರಾಜು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ:
​ಶ್ರೀ ಮೃತ್ಯುಂಜಯ ಬಡಿಗೇರ (ಸಮಾಜ ಸೇವಕರು, ಬೆಳಗಾವಿ)
​ಶ್ರೀ ಮಹಾಬಲೇಶ್ವರ ಸಾಬಣ್ಣವರ (ತಬಲ ವಾದಕರು, ಬೆಳಗಾವಿ)
​ಶ್ರೀ ದುರಗೇಶ ಮೇತ್ರಿ (ಬೆಳಗಾವಿ ಜಿಲ್ಲಾ ಭಲವಾಡಿ ಸಮಾಜದ ನಾಯಕರು)
​ಶ್ರೀ ಲಕ್ಷ್ಮಣ ಇಂಗಳಿ ಗೋಕಾಕ್ (ಡಾ. ಜಿ. ಪರಮೇಶ್ವರ ಬ್ರಿಗೇಡ್ ಸದಸ್ಯರು) ಭಾಗವಹಿಸಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು.
​ಕಾರ್ಯಕ್ರಮವನ್ನು ಬೆಳಗಾವಿಯ ರಾಜಕೀಯ ವಿಶ್ಲೇಷಕರಾದ ಹಾಗೂ ಕರ್ನಾಟಕ ದಲಿತ ಸಮಾಜದ ಮುಖಂಡರಾದ ಭಗವಾನ್ ಐಹೊಳಿ ಅವರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.        

ವರದಿ : ಸದಾಶಿವಮಹಾಂತೇಶ್ ಎಸ್ ಹುಲಿಕಟ್ಟಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST